Monday, April 24, 2006

ರಂಜನೀ ಟ್ಯೂಮರಿಗೂ ಪ್ರ'ಮೋದ' ಲೀವರಿಗೂ...

ವಿಶ್ವಾದ್ಯಂತ ಓದುಗರ ಕಾಂವ್ ಕಾಂವ್ ದೃಷ್ಟಿಗೆ ಬಿದ್ದಿರುವ ನನ್ನ ನೆಚ್ಚಿನ ಬ್ಲಾಗ್ bug ಬೊಗಳೆ ಪಂಡಿತರು ಯದ್ವಾತದ್ವ ಗುಂಡುಹೊಡೆದು 'ನೆಟ್'ಟರಿನಲ್ಲಿ ಮಿಂದಿದ್ದಾರೆ. ಅವರ proಮೋದಕ್ಕೆ ಬಲಿಯಾದದ್ದು ಪ್ರಮೋದ್ ಮಹಾಜನ್ ಅವರ ಜೀವನ್ಮರಣ 'ಹೋರಾಟ'ಕ್ಕೆ ಚಾಲನೆ ನೀಡಿದ ಪ್ರವೀಣ. ಪ್ರವೀಣನು 'ಗುಂಡು'ಹಾಕಿಕೊಂಡು ಗುಂಡು ಹೊಡೆದ ಎಂದು ನಮ್ಮ ಅಸತ್ಯಾನ್ವೇಷಿಗಳು ತೆಗೆದ ರಗಳೆ ನೋಡಿ ಭಯಭೀತರಾಗಿದ್ದ ಪ್ರವೀಣಸತಿಯು ತಡೆಯಲಾರದೆ ಬಾಯಿಬೀಗ ತೆರೆದು ತಮ್ಮ ಪತಿಯು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಹೇಳಿ ತಲೆ ಕೆಡಿಸಿದ್ದಾರೆ.

ಪ್ರಮೋದರಿಗೆ ಗುಂಡೇಟು ಬಿದ್ದೊಡನೆಯೇ ನಮ್ಮ ಚೆನ್ನೈನ ಅ'ಪರ'ಅಭಿಮಾನಿಗಳು ಹರ್ಷೋಚಿತ್ತರಾಗಿದ್ದರು. ದಂಗಾಗಿ ವಿಚಾರಿಸಿದಾಗ ಕಂಡುಬಂದ ವಿಚಾರಕ್ಕೆ ಮತ್ತಷ್ಟು ದಂಗಾಗಬೇಕಾಯಿತು. ತಮಿಳು ಚಿತ್ರಾನ್ನದ ಅನಾಶಕ್ತ ದೊರೆ ರಂಜನೀಕಾಂಡರ ಒಂದು ಚಿತ್ರದ ಪ್ರಸಂಗವೊಂದನ್ನು ಪರಿಪರಿಯಾಗಿ ಬೇಡವೆಂದರೂ ಕೇಳದೆ ಸ್ವಾ'ರಹಸ್ಯ'ವಾಗಿ ಬಣ್ಣಿಸಿದರು...

ಆ ಚಿತ್ರದಲ್ಲಿ,...ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ರಂಜನೀ ತಲೆಗೆ ಗುರಿ ಇಟ್ಟು ದುಷ್ಟರು ಗಂಡು ಹಾರಿಸಿದ್ದರು. ಒಂದು ಗುಂಡು ನೇರವಾಗಿ ರಂಜನೀ ತಲೆಯನ್ನು ಭೇದಿಸಿ ಹೊರ ಬಂದಿತ್ತು. ಪ್ರೇಕ್ಷಕರ 'ವಿಷ'ನಾದ ಇನ್ನೇನು ಹೊರಬರಬೇಕು ಅಷ್ಟರಲ್ಲಿ ವಿಸ್ಮಯ ನಡದೇಹೋಗಿತ್ತು. ದುಷ್ಟರ ಗುಂಡು ರಂಜನೀ ತಲೆಯನ್ನು ಹೊಕ್ಕು ಹೊರಬಂದಾಗ ಒಂದೇ ಬರಲಿಲ್ಲ-ತನ್ನೊಂದಿಗೆ ಟ್ಯೂಮರ್ ಅನ್ನೂ ಕದ್ದೊಯ್ದಿತ್ತು. ಹೋದ್ಯಾ ಪೀಡೆ ಎಂದು ಮು'ಗುಳ್ಳೆ'ನಗೆ ಬೀರುತ್ತಾ ರಂಜನೀ ರಂಜಿಸುತ್ತಿದ್ದರೆ ಪ್ರೇಕ್ಷಕರು ಗಿಂಜಿದ ಹಲ್ಲಿಗೆ ಥಿಯೇಟರಿನಲ್ಲಿದ್ದ ಇದ್ದಬದ್ದ ಬೆಳಕೂ ಮಾಯವಾಗಿ ಕಗ್ಗತ್ತಲಾಯಿತಂತೆ.

ರಂಜನೀಕಾಂಡರ ಮಿದುಳಿನ ಮರ್ಮ ಅ(ಹ)ರಿಯಲು ಹಾರಿಸಿದ್ದ ಗುಂಡು ಮಿದುಳುಗಡ್ಡೆಯನ್ನೇ ಹೊತ್ತುಬಂದದ್ದು ಹೇಗೆ? ಘಟನೆಯನ್ನು ಕೂಲಂ'ಕಸ'ವಾಗಿ ವಿಚಾರಿಸಿದಾಗ ತಿಳಿದುಬಂದದ್ದೇನೆಂದರೆ, ರಜನೀ ಮಿದುಳಿನಲ್ಲಿ ಟ್ಯೂಮರ್ ಬಿಟ್ಟು ಬೇರೆ ಏನೂ ಇಲ್ಲದ್ದರಿಂದ ಪಾಲಿಗೆ ಬಂದದ್ದೇ ಪಂಚಾ'ಮೃತ' ಎಂದು ಆ ಗುಂಡು ಆಂಜನೇಯನಂತೆ ಮಿದುಳುಗಡ್ಡೆಯನ್ನೇ ಹೊತ್ತಬಂದಿತಂತೆ.

ರಂಜನೀಕಾಂಡರ ಮಿದುಳು ಗುಡ್ಡೆಗೂ ಪ್ರಮೋದರಿಗೆ ತಗುಲಿದ ಗುಂಡಿಗೂ ಎತ್ತಣದಿಂದೆತ್ತಣ ಸಂಬಂಧವಯ್ಯಾ ಎಂದು ಕೇಳಿದೆ. ರಜನೀಯ ಬ್ರೈನ್ ಟ್ಯೂಮರ್ ಅನ್ನು ನಿವಾರಿಸಿದ ಹಾಗೆಯೇ ಪ್ರಮೋದರ ದೇಹ ಹೊಕ್ಕ ಗುಂಡು ಲಿವರ್, ಕಿಡ್ನಿ ಮೊದಲಾದ ಭಾಗಗಳನ್ನು ಆಪರೇಷನ್ ಮಾಡಿ ಅವರಿಗಿದ್ದ ಪೀಡೆಗಳನ್ನು ತೊಲಗಿಸಿದೆ ಆ 'ಸಿನಿ'ಕ ಪ್ರಿಯ ಮಿತ್ರ ವೃಂದ ಹಲ್ಕಿರಿದಿತ್ತು.

3 Comments:

Blogger Anveshi said...

ಮಾನ್ಯ ಸಾರಥಿಯವರೆ,

ನಮಗೆ ಬ್ಲಾಗ್ ಬಗ್ ಎಂದು ಹೆಸರಿಟ್ಟುದನ್ನು ಮೊದಲಾಗಿ ಖಂಡತುಂಡವಾಗಿ ಖಂಡಿಸುತ್ತೇವೆ. ಆಮೇಲೆ ಅದನ್ನು ಸ್ವಾಗತಿಸದೆ ಖಂಡಿತ ಬಿಡುವುದಿಲ್ಲ.

ನಿಮ್ಮ ರಂಜನೀ ಕಾಂಡದ ನೆಪ ಮುಂದಿಟ್ಟು ಮೋದಕ ಮಹಾಜನ್‌ರ ಕಿಡ್ನಿಯಲ್ಲಿನ ಕಲ್ಲು ಕರಗಿದೆ ಎಂದು ನೀವು ಬೊಗಳೆ ಬಿಟ್ಟದ್ದು ನೋಡಿದರೆ ಗುಂಡು ಪ್ರವೀಣನ ಹಿಂದೆ ನೀವೇ ಇದ್ದೀರೆ ಎಂಬ ಸಂಶಯ ಮೂಡುತ್ತಿದೆ.

ಹಾಗಿದ್ದರೆ ಅಸತ್ಯಾನ್ವೇಷಿಗೆ ಮೆದುಳು ಇದೆಯೇ, ಇಲ್ಲವೇ ಎಂದು ನೋಡಲು ಆ ತಲೆಗೂ ಗುಂಡು ಹಾರಿಸುವ ಯೋಜನೆಯಿದೆಯೇ ಎಂಬ ಕುತೂಹಲ ಕಾಡುತ್ತಿದೆ. ಅಸತ್ಯಾನ್ವೇಷಿ ತಲೆಗೆ ಗುಂಡು ಹಾರಿಸುವ ಮೊದಲು ನಮ್ಮ ಬೊಗಳೆ ರಗಳೆಬ್ಯುರೋಕ್ಕೆ ತಿಳಿಸಿ. ಯಾಕೆಂದರೆ ಈ ಸುದ್ದಿ ಎಲ್ಲಾ ಟಿವಿ, ನೆಟ್, ಪತ್ರಿಕೆಗಳಿಗಿಂತ ಮೊದಲು ನಮ್ಮ ಪತ್ರಿಕೆಯಲ್ಲೇ "BREAK" ಆಗಿ ಪುಡಿಪುಡಿಯಾಗಬೇಕು.

11:03 AM  
Blogger bhadra said...

ನಿಮ್ಮ ವಿಷಯ ಪ್ರಸ್ತಾವನೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಅನಿಸಿಕೆಯಂತೆ ಪ್ರಮೋದರಿಗಿರುವ ಎಲ್ಲ ರೋಗಗಳನ್ನು ಗುಂಡುಗಳು ಗುಂಡಾಯಿಸಿ ಅವರನ್ನು ದೇಶದ ಗಂಡನ್ನಾಗಿ ಮಾಡಲಿ.

ಲೇಖನ ಓದಿ ಮನ ಮುದಗೊಂಡಿದೆ.

4:16 PM  
Blogger Sarathy said...

ಮೋದಕ ಮಹಾಜನ್ ಕಿಡ್ನಿ ಕರಗಿದೆ ಎಂದು ನಾನು ಬಿಟ್ಟ ಬೊಗಳೆಯಲ್ಲ ರಗಳೆ ಪಂಡಿತರೆ, ಅದು ನನ್ನ ಚೆನ್ನ(ಐ) ಮಿಥ್ಯ(ತ್ರ)ರು ಒದರಿದ್ದ ಸುದ್ದಿ.

ತವಿಶ್ರೀ ಅವರೇ, ಧನ್ಯವಾದಗಳು.

11:24 AM  

Post a Comment

<< Home